ಕಳೆದವರ್ಷದಿಂದ ಕೊರೋನ ಕೊಡುತ್ತಿರುವ ಕಾಟ ಅಷ್ಟಿಷ್ಟಲ್ಲ. ಇದರಿಂದ ಸಾಕಷ್ಟು ಮಂದಿ ಸಂಕಷ್ಟಕೀಡಾಗಿದ್ದಾರೆ.
ಇಂತಹ ಸಮಯದಲ್ಲಿ ಸಮಾಜಮುಖಿ ಕಾರ್ಯಗಳನ್ನು ಮಾಡುವುದು ನಮ್ಮ ಕರ್ತವ್ಯ.
ಐರಾವಾನ್ ಚಿತ್ರದ ನಾಯಕ ವಿವೇಕ್ ಉತ್ತಮ ಕಾರ್ಯ ಮಾಡಿದ್ದಾರೆ.
ಯಲಹಂಕದ ಮಾತೃ ಎಜುಕೇಷನಲ್ ಟ್ರಸ್ಟ್ ನ ಸ್ಥಾಪಕರಾದ ಗುಬ್ಬಿ ಆರ್ ಮುಕ್ತ ಅವರೊಂದಿಗೆ ಕೈಜೋಡಿಸಿ ಮಾತೃ ಎಜುಕೇಶನಲ್ ಟ್ರಸ್ಟ್
ನಲ್ಲಿರುವ 155ಕ್ಕೂ ಹೆಚ್ಚು ಅಂಧ ಹಾಗೂ ಬುದ್ಧಿಮಾಂದ್ಯ ಮಕ್ಕಳಿಗೆ ಕೊರೋನ ಲಸಿಕೆ ಹಾಕಿಸಿದ್ದಾರೆ. ಇವರ ಸಮಾಜಮುಖಿ ಕಾರ್ಯಕ್ಕೆ ಸಾಮಾಜಿಕ ಕಾರ್ಯಕರ್ತ ಪವನ್ ಕುಮಾರ್ ಕೂಡ ಸಾಥ್ ನೀಡಿದ್ದಾರೆ.