Chief Editor
Manohar. R (Manu)
Photo Journalist
chitrataramanu@gmail.com
+91 9845549026
ಸೀಸ್ ಕಡ್ಡಿಯಲ್ಲಿ ಜೀವನ ರೂಪಿಸಿಕೊಂಡವರು....ರೇಟಿಂಗ್: 3.5/5****
Posted date: 07 Sat, Jun 2025 11:45:52 AM
ಮನುಷ್ಯನ ಬದುಕೇ ಹಾಗೆ ಅಂದುಕೊಂಡ ಹಾಗೆ ಯಾವುದೂ ಆಗಲ್ಲ. ಹಾಗಂತ ನಮ್ಮ ಪ್ರಯತ್ನ ನಿಲ್ಲಿಸಬಾರದು. ನಮ್ಮ ಬದುಕನ್ನು ನಾವೇ ರೂಪಿಸಿಕೊಳ್ಳಬೇಕು. ಅದು ಸೀಸದ ಕಡ್ಡಿ ಥರ. ಬಿಳಿ ಹಾಳೆಯ ಮೇಲೆ ನಾವೇನು ಬರೆಯುತ್ತೇವೋ ಅದನ್ನು ಮೂಡಿಸುತ್ತದೆ.  ಮಾನವನ ಜೀವನವನ್ನು ಹಲವಾರು ದೃಷ್ಟಿಕೋನಗಳಲ್ಲಿ ಹೇಳಲು  ನಿರ್ದೇಶಕ ರತನ್ ಗಂಗಾಧರ್ ಅವರು ಈ ಚಿತ್ರದ ಮೂಲಕ ಪ್ರಯತ್ನಿಸಿದ್ದಾರೆ.
 
ತಂದೆ ತಾಯಿಗೆ ತಮ್ಮ ಮಗಳ ಭವಿಷ್ಯವೇ ಮುಖ್ಯವಾಗಿರುತ್ತದೆ. ಆದರೆ ಮಗಳಿಗೆ ಹೆಸರನ್ನೇ ಇಡದೆ, ಆಕೆ ತನ್ನ ಸಾಧನೆಯಿಂದಲೇ ಹೆಸರು  ಮಾಡಬೇಕು ಎಂಬ ಉದ್ದೇಶ ಹೊಂದಿರುತ್ತಾರೆ. ಆರಂಭದಲ್ಲಿ ಅವಮಾನ ಆದರೂ ಆಕೆ ಹೆಸರು ಮಾಡಿದ ಮೇಲೆ ಅದು ಅವಶ್ಯಕ ಎನಿಸಲ್ಲ. ಒಂದು ಅಸ್ತಿತ್ವಕ್ಕಾಗಿ ಅಕೆ ಸಂಗೀತದಲ್ಲಿ ಸಾಧನೆ ಮಾಡಲು ಹೊರಟಾಗ  ಎದುರಿಸುವ ಅಡೆತಡೆಗಳು ಒಂದೆಡೆಯಾದರೆ, ಗ್ರಾಮೀಣ ಭಾಗದ ಶಾಲೆಯಲ್ಲಿ ಓದುತ್ತು ತಂದೆ, ತಾಯಿ, ಅಜ್ಜ, ಎಲ್ಲಾ ಇದ್ದರೂ ರವಿಶನಿಗೆ ತನ್ನ ಗುರುಗಳ ಮಾರ್ಗದರ್ಶನದಲ್ಲಿ ಕ್ಯಾಲಿಗ್ರಫಿ ಸ್ಪರ್ಧೆಗೆ ಹೋಗಲು ಸ್ಫೂರ್ತಿ, ಧೈರ್ಯವನ್ನ ತುಂಬುವ ನಿಟ್ಟಿನಲ್ಲಿ ಎದುರಾಗುವ ಸಮಸ್ಯೆಗಳು, 
ಇನ್ನು ಹಳ್ಳಿಯ ಹೋಟೆಲ್‌ನಲ್ಲಿ ಕೆಲಸ ಮಾಡುತ್ತಾ ತಾಯಿ ಇಲ್ಲದೆ, ಅನಾರೋಗ್ಯ ಪೀಡಿತ ತಂದೆಯನ್ನ ನೋಡಿಕೊಳ್ಳುವ ಹುಡುಗಿ  ಮಂಜಿ, ಬದುಕಿನ ಕಷ್ಟಗಳನ್ನು ಹತ್ತಿರದಿಂದ ಕಾಣುತ್ತಾ ಓದಿನ ಕಡೆಗೂ ಗಮನ ಹರಿಸುವ ಈಕೆ ಭವಿಷ್ಯವನ್ನು ನೋಡುವ  ದೃಷ್ಟಿಕೋನವೇ  ವಿಚಿತ್ರವಾಗಿರುತ್ತದೆ. ಇನ್ನು ಗ್ಯಾರೇಜಿನಲ್ಲಿ ಕೆಲಸ ಮಾಡುವ ತೌಫಿಕ್ ತನ್ನ ಕುಟುಂಬ ನಿರ್ವಹಣೆಯ ಜೊತೆಗೆ ಸಿನಿಮಾ ನೋಡುವ ಹವ್ಯಾಸ ಬೆಳೆಸಿಕೊಂಡಿರುತ್ತಾನೆ. ಆದರೆ ಆತ ಚಿತ್ರ ನೋಡುವ ರೀತಿಯೇ ವಿಭಿನ್ನ.
 
ಆರಂಭದಿಂದ ಚಿತ್ರ ನೋಡಿದ ನಂತರವ ಅದರ ಯೋಗ್ಯತೆಗೆ ಅನುಸಾರವಾಗಿ ಹಣ ನೀಡಿ ಟಿಕೆಟ್ ಪಡೆಯುತ್ತಾನೆ. ಹೀಗೆ ಆ ಥೇಟರ್ ಮಾಲೀಕ ಹಾಗೂ ತೌಫೀಕ್ ನಡುವೆ  ಒಪ್ಪಂದವೂ ಆಗಿರುತ್ತದೆ.  ಯುವ ಕಥೆಗಾರ, ನಿರ್ದೇಶಕ ವಿಕ್ಕಿ ಒಂದು ಸಿನಿಮಾ ಮಾಡಬೇಕೆಂದು  ನಿರ್ಮಾಪಕರ ಹುಡುಕಾಟದಲ್ಲಿರುತ್ತಾನೆ. ಆಚಾನಕ್ಕಾಗಿ ತೌಫಿಕ್ ಭೇಟಿಯಾಗಿ, ಇವನಿಬ್ಬರ ಆಲೋಚನೆ ದೃಷ್ಟಿಕೋನ ಬೇರೆಯದೇ ದಾರಿಯನ್ನ ತೋರಿಸುತ್ತದೆ.
 
ಹೀಗೆ ಒಂದಷ್ಟು ವ್ಯಕ್ತಿಗಳ ಬದುಕಿನಲ್ಲಿ ನಡೆಯೋ ಘಟನೆಗಳು, ಒಂದಕ್ಕೊಂದು ಬೆಸೆದುಕೊಂಡು ಸಾಗುತ್ತಾ ಹೋಗಿ, ಕೊನೆಗೆ ಇವೆಲ್ಲ ಒಂದು ಹಂತಕ್ಕೆ ಬಂದು ಅವರವರು ಕಂಡುಕೊಳ್ಳುವ ಮಾರ್ಗವೇನು  ಏ ಎಂಬುದನ್ನು ನಿರ್ದೇಶಕ ರತನ್ ಗಂಗಾಧರ್  ಅವರು ಬಹಳ ಸೂಕ್ಷ್ಮವಾಗಿ ತೆರೆಮೇಲೆ ಮೂಡಿಸುತ್ತ ಹೋಗಿದ್ದಾರೆ. ಆದರೆ ಅದನ್ನು ನೋಡುವ ಪ್ರೇಕ್ಷಕ ನಿಧಾನವಾಗಿ ಅರ್ಥೈಸಿಕೊಳ್ಳಬೇಕಷ್ಟೇ, ಇಂಥ ಕಥೆಗಳನ್ನು ಆಯ್ಕೆ ಮಾಡಿಕೊಂಡಿರುವ ನಿರ್ದೇಶಕರ ಆಲೋಚನೆಯೇ ವಿಭಿನ್ನವಾಗಿದೆ. 
 
ಒಬ್ಬೊಬ್ಬರ ಬದುಕಿನಲ್ಲೂ ಎದುರಾಗುವ ಒಂದಷ್ಟು ಘಟನೆಗಳು ಹೇಗೆಲ್ಲಾ ಅವರನ್ನು ಇಕ್ಕಟ್ಟಿಗೆ ಸಿಕ್ಕಿಸಿ, ಸಮಸ್ಯೆಗಳನ್ನು ತಂದೊಡ್ಡುತ್ತದೆ. ಅದರಿಂದ ಹೊರಬರಲು ಅವರು ಯಾವ  ಮಾರ್ಗ ಕಂಡುಕೊಳ್ಳುತ್ತಾರೆ ಎಂಬುದನ್ನ ಬಹಳ ಹಾಳ್ಮೆಯಿಂದ ಹೇಳಿದ್ದಾರೆ.  ನಾಡಿನ ಬೇರೆ ಬೇರೆ ಪ್ರಾಂತ್ಯಗಳ ಕನ್ನಡ ಭಾಷಾ ಸೊಗಡನ್ನು ಚಿತ್ರದಲ್ಲಿ ನೈಜವಾಗಿ ತೋರಿಸುವಲ್ಲಿ ನಿರ್ದೇಶಕರು ಸಫಲರಾಗಿದ್ದಾರೆ, ಬೆಂಗಳೂರು ಕನ್ನಡ, ಹವ್ಯಕ ಕನ್ನಡ, ತುಮಕೂರು ಭಾಗದ ಹಳ್ಳಿಗಾಡಿನ ಶೈಲಿಯ ಕನ್ನಡ ಗಮನ ಸೆಳೆಯುತ್ತದೆ. ಈ ಚಿತ್ರದ ಸಂಗೀತ, ಹಿನ್ನೆಲೆ ಸಂಗೀತ ಗಮನ ಸೆಳೆಯುತ್ತದೆ.
 
ಚಿತ್ರತಂಡ ಬಹಳ ಎಫರ್ಟ್ ಹಾಕಿರುವುದು ಎದ್ದು ಕಾಣುತ್ತದೆ. ಮೌನದಲ್ಲೇ ಸೌಮ್ಮ ಜಗನ್ ಮೂರ್ತಿ ಅದ್ಭುತವಾಗಿ ನಟಿಸಿದ್ದಾರೆ. ಶಾಲಾ ಶಿಕ್ಷಕರಾಗಿ ಸಂತೋಷ ಕರ್ಕ, ವಿದ್ಯಾರ್ಥಿಯಾಗಿ ಪ್ರಥಮ್, ಹಳ್ಳಿ ಹುಡುಗಿಯಾಗಿ ಅನುಷ್ಕು ಸೇರಿದಂತೆ ಚಿತ್ರದಲ್ಲಿ ಅಭಿನಯಿಸಿರುವ ಪ್ರತಿ ಕಲಾವಿದರೂ ತಮ್ಮ ತಮ್ಮ ಪಾತ್ರಗಳಿಗೆ ಜೀವ ತುಬ ಚಿತ್ರದ ಓಕ್ಕೆ ಉತ್ತಮ ಸಾಥ್ ನೀಡಿದ್ದಾರೆ. ಸೀಸ್ ಕಮ್ಮಿಗಿರುವ ಶಕ್ತಿ, ಅದನ್ನು ಬಳಸಿಕೊಳ್ಳುವ ಪರಿ ಹೇಗೆ ಎಂಬುದನ್ನು ನಿರ್ದೇಶಕ ರತನ್ ಗಂಗಾಧರ್ ಅವರು ಬದಳ ಸೂಕ್ಷ್ಮವಾಗಿ ಹೇಳಿದ್ದಾರೆ.
Kannada Cinema's Latest Wallpapers
Kannada Cinema's Latest Videos
Kannada Movie/Cinema News - ಸೀಸ್ ಕಡ್ಡಿಯಲ್ಲಿ ಜೀವನ ರೂಪಿಸಿಕೊಂಡವರು....ರೇಟಿಂಗ್: 3.5/5**** - Chitratara.com
Copyright 2009 chitratara.com Reproduction is forbidden unless authorized. All rights reserved.